Monday, 16 May 2016

ಕನ್ನಡ ಬೆಳಕಾಗುವ ಮುನ್ನ ಪರಿಷತ್ ಬೆಳಗುತ್ತಿದೆ.

ಆತ್ಮೀಯರೇ ನಮಸ್ಕಾರ...

ಚಿಕ್ಕ ಚಿಕ್ಕ ಕೆಲಸಗಳು ಕೂಡ ಕನ್ನಡ ತಾಯಿಯ ಕಿರೀಟಕ್ಕೆ ಮುತ್ತಿನ ಮಣಿಗಳು. ಸಂಜೆಯಾಗುತ್ತಿದ್ದಂತೆ ಸಾಹಿತ್ಯ ಪರಿಷತ್ ನಲ್ಲಿ ಕಾರ್ಯಕ್ರಮ ಮುಗಿಸಿ ಹೊರಡುವಾಗ ನಡೆದಾಡಲು ತಡಕಾಡುವಷ್ಟು ಕತ್ತಲು.

ಅದಕ್ಕಾಗಿ ಕನ್ನಡಿಗರ ಬೆಳಕಾಗಿರುವ ಪರಿಷತ್ ಕಟ್ಟಡ, ಅಲ್ಲಿನ ಆವರಣ, ನಡೆವ ದಾರಿ ಬೆಳಕಿನಿಂದ ತುಂಬಿರಲು ಈಗಾಗಲೇ ಮುಂಭಾಗದಲ್ಲಿ ಎರಡು ವಿದ್ಯುತ್ ದೀಪಗಳನ್ನು ಹಾಕಿಸಿದ್ದೇನೆ. ಬಲ ಬದಿಯ್ಲಲ್ಲೂ ಕೂಡ ದೀಪಗಳು ಬೆಳಗಲು ವ್ಯವಸ್ಧೆ ಯಾಗಿದೆ.

ಕನ್ನಡ ಬೆಳಕಾಗುವ ಮುನ್ನ ಪರಿಷತ್ ಬೆಳಗುತ್ತಿದೆ.

ಅದು ಮುಂದೆ ಹೊಳೆಯುವ ಹಾದಿಯಲ್ಲಿ ನಮ್ಮ ಕೈಂಕರ್ಯ ಸಾಗುತ್ತಿದೆ.

ಆಶೀರ್ವದಿಸಿ, ಸಲಹೆ ನೀಡಿ, ಕೈ ಜೋಡಿಸಿ.

ಜೊತೆ ಜೊತೆಗೆ ಬನ್ನಿ. ಕನ್ನಡಮ್ಮಳ ಸೇವೆಗೆ....









ಇವೆಲ್ಲಾ ಚಿತ್ರಗಳು ರಾತ್ರಿಯಲಿ ಪರಿಷತ್ತು ಕ್ಯಾಮರಕ್ಕೆ ಸಿಕ್ಕ ಸೆರೆ


ನಿಮ್ಮ ಮಾಯಣ್ಣ,ಅಧ್ಯಕ್ಷರು,
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು.



Saturday, 14 May 2016

ಕಸಾಪ ಅಂಗಳದಲ್ಲಿ ಯಶಸ್ವಿ ಸಂಗೀತ ಸೌರಭ

ಪ್ರಥಮ ಬೆಂಗಳೂರು ನಗರ ಜಿಲ್ಲೆ ಸಂಗೀತ ಸೌರಭ ಕಾರ್ಯಕ್ರಮ ಕಸಾಪ ಅಂಗಳದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಶ್ರೀ ನಾರಾಯಣರಾವ್ ಮಾನೆ ಅವರನ್ನು ಗೌರವಿಸಲಾಯಿತು.
ನಿಕಟಪೂರ್ವ ಅಧ್ಯಕ್ಷರಾದ ಶ್ರೀ ತಿಮ್ಮೇಶ್  ˌಹಲವಾರು ಗಣ್ಯರು ಉಪಸ್ಥಿತರಿದ್ದರು.