Friday, 29 April 2016

" ಕನ್ನಡ ಚಳುವಳಿ ನಡೆದು ಬಂದ ದಾರಿ " ಉಪನ್ಯಾಸ ಕಾರ್ಯಕ್ರಮ

ಬಿ ಇ ಎಂ ಎಲ್  ಕನ್ನಡ ಸಂಘ ದ ವತಿಯಿಂದ ಆಯೋಜಿಸಲಾಗಿದ್ದ " ಕನ್ನಡ ಚಳುವಳಿ ನಡೆದು ಬಂದ ದಾರಿ " ವಿಷಯದ ಕುರಿತು ಏರ್ಪಡಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಮಾಯಣ್ಣ ಅವರು ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು . ಹಿರಿಯ ಸಾಹಿತಿ , ಕನ್ನಡ ಚಳುವಳಿ ಹೋರಾಟಗಾರ ರಾದ ಶ್ರೀ ರಾ ನಂ  ಚಂದ್ರಶೇಖರ್ ಉಪನ್ಯಾಸ ನೀಡಿದರು . ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಬಿ . ವಿ . ಗೋಪಾಲಕೃಷ್ಣ ಅವರು , ಸರ್ ಸಿ ವಿ ರಾಮನ್ ನಗರ ವಿಧಾನಸಭಾ ಕಸಾಪ  ಘಟಕದ ಅಧ್ಯಕ್ಷರಾದ ಶ್ರೀ ಹೆಬ್ಬಗೋಡಿ ಗೋಪಾಲ್ ಅವರು ಉಪಸ್ಥಿತರಿದ್ದರು .

Thursday, 28 April 2016

ಕಸಾಪ ವತಿಯಿಂದ ಶ್ರದ್ಧಾಂಜಲಿ

ದಿನಾಂಕ ೨೭/೦೪/೨೦೧೬  ರಂದು  ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಹಾಗು ಬೆಂಗಳೂರು ನಗರ ಜಿಲ್ಲಾ ಕಸಾಪ   ವತಿಯಿಂದ ಅಗಲಿದ ಹಿರಿಯ ಚೇತನ ಶ್ರೀ ಪುಂಡಲೀಕ ಹಾಲಂಬಿ ಅವರಿಗೆ ಶ್ರದ್ಧಾಂಜಲಿ ಸಭೆ ಯನ್ನು ಏರ್ಪಡಿಸಲಾಗಿತ್ತು . ಹಲವಾರು ಗಣ್ಯರು ನುಡಿನಮನ , ಪುಷ್ಪನಮನ  ಸಲ್ಲಿಸಿದರು . ಅವರ ಕನ್ನಡ ಕೈಂಕರ್ಯ , ಗುಣ ಗಳನ್ನು  ಸ್ಮರಿಸಿದರು . ಹಾಲಂಬಿ ಅವರ ಕುಟುಂಬಸ್ಥರು ಸಹ ಹಾಜರಿದ್ದರು . 









Wednesday, 27 April 2016

ಕನ್ನಡ ಸಿರಿ ಶ್ರೀ ಪುಂಡಲೀಕ ಹಾಲಂಬಿ






ಅನಿಕೇತನ ಕನ್ನಡ ಬಳಗ ವತಿಯಿಂದ ಪ್ರಕಟಿಸಲಾಗಿದೆ . 

Monday, 25 April 2016

ಆನೇಕಲ್ ಕಸಾಪ ವತಿಯಿಂದ ಶ್ರೀ ಪುಂಡಲೀಕ ಹಾಲಂಬಿ ಅವರಿಗೆ ಶ್ರದ್ಧಾಂಜಲಿ

ಆನೇಕಲ್ ವಿಧಾನಸಭೆ  ಕಸಾಪ ವತಿಯಿಂದ ಅಗಲಿದ ಹಿರಿಯ ಚೇತನ  ಶ್ರೀ ಪುಂಡಲೀಕ ಹಾಲಂಬಿ ಅವರಿಗೆ  ಅಧ್ಯಕ್ಷರಾದ ಶ್ರೀ ನವೀನ ಬಾಬು ಅವರನ್ನೊಳಗೊಂಡ ಸದಸ್ಯರು , ಅಭಿಮಾನಿಗಳು ಶ್ರದ್ಧಾಂಜಲಿ   ಸಲ್ಲಿಸಿದರು  . 














ಶ್ರೀ ಪುಂಡಲೀಕ ಹಾಲಂಬಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಕನ್ನಡ ಸಾಹಿತ್ಯ ಪರಿಷತ್ತು  ನಿಕಟ ಪೂರ್ವ  ಅಧ್ಯಕ್ಷರು , ಕನ್ನಡ ಕಳಕಳಿಯ  ಹಿರಿಯ ಚೇತನ ,  ಸರಳ , ಸಜ್ಜನಿಕೆ ವ್ಯಕ್ತಿತ್ವ ದ ಕನ್ನಡಾಭಿಮಾನಿ , ಕನ್ನಡ ಕಟ್ಟಾಳು , ಬೆಂಗಳೂರು  ನಗರ ಜಿಲ್ಲೆ ಕಸಾಪ  ಫೋಷಕರು   ಶ್ರೀ ಪುಂಡಲೀಕ ಹಾಲಂಬಿ  ಅವರು ದಿನಾಂಕ ೨೪/೦೪/೨೦೧೬  ಅನಾರೋಗ್ಯ ದ ನಿಮಿತ್ತ   ನಮ್ಮನ್ನೆಲ್ಲಾ ಅಗಲಿದ್ದಾರೆ .

ಬೆಂಗಳೂರು ನಗರ ಜಿಲ್ಲೆ ಕಸಾಪ ವತಿಯಿಂದ ಅವರಿಗೆ  ಭಾವಪೂರ್ಣ  ಶ್ರದ್ಧಾಂಜಲಿ  ಯನ್ನು ಅರ್ಪಿಸುತ್ತಿದ್ದೇವೆ . ಅವರ ಅಗಲಿಕೆ ನಮ್ಮೆಲ್ಲರಿಗೂ ಅಪಾರ ನೋವು ತಂದಿದೆ . 




  

Thursday, 21 April 2016

ಪದಾಧಿಕಾರಿಗಳು ಹಾಗು ಘಟಕಗಳ ಅಧ್ಯಕ್ಷರು ಗಣ್ಯರೊಂದಿಗೆ

ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಾಗು ಘಟಕಗಳ ಅಧ್ಯಕ್ಷರು ಗಣ್ಯರೊಂದಿಗೆ








ಯಶಸ್ವಿಯಾಗಿ ಕಾರ್ಯಚಟುವಟಿಕೆ ಗಳ ಉದ್ಘಾಟನಾ ಕಾರ್ಯಕ್ರಮ

 ಬೆಂಗಳೂರು ನಗರ ಜೆಲ್ಲೆ ಕನ್ನಡ ಸಾಹಿತ್ಯ ಪರಿಷತ್ ನ  ೨೦೧೬-೨೦೧೯ ರ ಅವಧಿಯ ಕಾರ್ಯಚಟುವಟಿಕೆ ಗಳ ಉದ್ಘಾಟನಾ ಕಾರ್ಯಕ್ರಮ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಲವಾರು ಗಣ್ಯ ಮಾನ್ಯರ , ಕನ್ನಡ ಅಭಿಮಾನಿಗಳ , ಕಸಾಪ ಸದಸ್ಯರ , ಮಾಧ್ಯಮ ಮಿತ್ರರ , ಕನ್ನಡ ಸಂಘಟನೆ , ಚಳುವಳಿಗಾರರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು . 

















ಸಹಕರಿಸಿದ ಎಲ್ಲಾ ಸಹೃದಯರಿಗೆ ನಗರ ಜಿಲ್ಲೆ ಕಸಾಪ ವತಿಯಿಂದ ತುಂಬು ಹೃದಯದ ಕೃತಜ್ಞತೆಗಳು . 

Sunday, 17 April 2016

2016-2019 ರ ಅವಧಿ ಯ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಬೆಂಗಳೂರು ನಗರ ಜಿಲ್ಲಾ  ಕನ್ನಡ ಸಾಹಿತ್ಯ ಪರಿಷತ್ತು ನ 2016-2019 ರ ಅವಧಿ ಯ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ದಿನಾಂಕ 21/04/2016 ರ ಸಂಜೆ 5 ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು , ಶ್ರೀ ಕೃಷ್ಣ ರಾಜಪರಿಷನ್ಮಂದಿರ ದಲ್ಲಿ . 


ಎಲ್ಲಾ ಕನ್ನಡ ಅಭಿಮಾನಿಗಳು , ಆಜೀವ ಸದಸ್ಯರು , ಕನ್ನಡ ಹೋರಾಟಗಾರರು , ಸಾಹಿತಿಗಳು , ಕನ್ನಡ ಸಂಘ -ಸಂಸ್ಥೆ ಗಳ ಸದಸ್ಯರು , ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸವಿನಯ ಪ್ರಾರ್ಥನೆ . 

Monday, 11 April 2016

ಸ್ವಾಗತ ಕನ್ನಡ ಕೈಂಕರ್ಯಕ್ಕಾಗಿ

ಆತ್ಮೀಯ ಕನ್ನಡ ಬಂಧುಗಳೇ ನಮಸ್ಕಾರ ,


ಕನ್ನಡ ಸಾಹಿತ್ಯ ಪರಿಷತ್ತು ಇತಿಹಾಸದಲ್ಲೇ ಪ್ರಥಮ ಬಾರಿಗೆ ಅನ್ನಬಹುದೇನೋ , ಎಂಬುವಂತೆ ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು  ವೆಬ್ ನ್ನು ಸೃಷ್ಟಿಸಿದೆ . ಈ ಅಧುನಿಕ ಜಗತ್ತಿನ ತಂತ್ರಜ್ಞಾನ , ಒತ್ತಡದ ಬದುಕಿನಲ್ಲಿ ಕನ್ನಡ ಕಟ್ಟುವಲ್ಲಿ , ಜನರನ್ನು ತಲುಪುವಲ್ಲಿ ಅಂತರ್ಜಾಲದ ಸಾಮಾಜಿಕ ಜಾಲ ತಾಣಗಳು ಅಥವಾ ಇನ್ಯಾವುದೇ ಮಾಧ್ಯಮಗಳು ಬಹಳ ಪರಿಣಾಮ ಕಾರಿಯಾಗಬಲ್ಲವು . ಹಾಗಾಗಿಯೇ ಈ ವೆಬ್ ನ್ನು ರಚಿಸಿದ್ದೇವೆ .

ಕನ್ನಡ ಬಂಧುಗಳು ತಮ್ಮ ಸಲಹೆ ಸೂಚನೆ ಗಳನ್ನು ನಮಗೆ ತಿಳಿಸಿ , ಮುಂದಿನ ದಿನಗಳಲ್ಲಿ ರಾಜಧಾನಿಯಲಿ ಕನ್ನಡ ಕಟ್ಟಲು ನಾವೆಲ್ಲಾ ಜೊತೆ ಗೂಡಿ ಕೆಲಸ ಮಾಡೋಣ .

ಮಿಂಚೆ ವಿಳಾಸ : kasapabnj@gmail.com
ವಾಟ್ಸ್ ಅಪ್ : ೯೩೪೧೩೯೮೯೨೭
ವೆಬ್ : http://kasapabnj.blogspot.in
ಸ್ಥಿರ ದೂರವಾಣಿ :೦೮೦-೨೬೬೦೩೦೯೯
ಜಂಗಮ ವಾಣಿ :೯೫೩೮೬೩೫೫೫೧

ಧನ್ಯವಾದಗಳು

ಮಾಯಣ್ಣ
ಅಧ್ಯಕ್ಷರು
ಬೆಂಗಳೂರು ನಗರ ಜಿಲ್ಲೆ ಕಸಾಪ