ಬಿ ಇ ಎಂ ಎಲ್ ಕನ್ನಡ ಸಂಘ ದ ವತಿಯಿಂದ ಆಯೋಜಿಸಲಾಗಿದ್ದ " ಕನ್ನಡ ಚಳುವಳಿ ನಡೆದು ಬಂದ ದಾರಿ " ವಿಷಯದ ಕುರಿತು ಏರ್ಪಡಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಮಾಯಣ್ಣ ಅವರು ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು . ಹಿರಿಯ ಸಾಹಿತಿ , ಕನ್ನಡ ಚಳುವಳಿ ಹೋರಾಟಗಾರ ರಾದ ಶ್ರೀ ರಾ ನಂ ಚಂದ್ರಶೇಖರ್ ಉಪನ್ಯಾಸ ನೀಡಿದರು . ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಬಿ . ವಿ . ಗೋಪಾಲಕೃಷ್ಣ ಅವರು , ಸರ್ ಸಿ ವಿ ರಾಮನ್ ನಗರ ವಿಧಾನಸಭಾ ಕಸಾಪ ಘಟಕದ ಅಧ್ಯಕ್ಷರಾದ ಶ್ರೀ ಹೆಬ್ಬಗೋಡಿ ಗೋಪಾಲ್ ಅವರು ಉಪಸ್ಥಿತರಿದ್ದರು .
ರಾಜಧಾನಿಯಲ್ಲಿ ಕನ್ನಡ ದೀಪ ಹಚ್ಚೋಣ ಮಿಂಚೆ :ಕಸಾಪ ಬಿಏನ್ ಜೆ @ಜಿ ಮೇಲ್ . ಕಂ , ನಿಸ್ತಂತು :೯೫೩೮೬೩೫೫೧
Friday, 29 April 2016
Thursday, 28 April 2016
ಕಸಾಪ ವತಿಯಿಂದ ಶ್ರದ್ಧಾಂಜಲಿ
ದಿನಾಂಕ ೨೭/೦೪/೨೦೧೬ ರಂದು ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಹಾಗು ಬೆಂಗಳೂರು ನಗರ ಜಿಲ್ಲಾ ಕಸಾಪ ವತಿಯಿಂದ ಅಗಲಿದ ಹಿರಿಯ ಚೇತನ ಶ್ರೀ ಪುಂಡಲೀಕ ಹಾಲಂಬಿ ಅವರಿಗೆ ಶ್ರದ್ಧಾಂಜಲಿ ಸಭೆ ಯನ್ನು ಏರ್ಪಡಿಸಲಾಗಿತ್ತು . ಹಲವಾರು ಗಣ್ಯರು ನುಡಿನಮನ , ಪುಷ್ಪನಮನ ಸಲ್ಲಿಸಿದರು . ಅವರ ಕನ್ನಡ ಕೈಂಕರ್ಯ , ಗುಣ ಗಳನ್ನು ಸ್ಮರಿಸಿದರು . ಹಾಲಂಬಿ ಅವರ ಕುಟುಂಬಸ್ಥರು ಸಹ ಹಾಜರಿದ್ದರು .
Wednesday, 27 April 2016
Monday, 25 April 2016
ಶ್ರೀ ಪುಂಡಲೀಕ ಹಾಲಂಬಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷರು , ಕನ್ನಡ ಕಳಕಳಿಯ ಹಿರಿಯ ಚೇತನ , ಸರಳ , ಸಜ್ಜನಿಕೆ ವ್ಯಕ್ತಿತ್ವ ದ ಕನ್ನಡಾಭಿಮಾನಿ , ಕನ್ನಡ ಕಟ್ಟಾಳು , ಬೆಂಗಳೂರು ನಗರ ಜಿಲ್ಲೆ ಕಸಾಪ ಫೋಷಕರು ಶ್ರೀ ಪುಂಡಲೀಕ ಹಾಲಂಬಿ ಅವರು ದಿನಾಂಕ ೨೪/೦೪/೨೦೧೬ ಅನಾರೋಗ್ಯ ದ ನಿಮಿತ್ತ ನಮ್ಮನ್ನೆಲ್ಲಾ ಅಗಲಿದ್ದಾರೆ .
ಬೆಂಗಳೂರು ನಗರ ಜಿಲ್ಲೆ ಕಸಾಪ ವತಿಯಿಂದ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಯನ್ನು ಅರ್ಪಿಸುತ್ತಿದ್ದೇವೆ . ಅವರ ಅಗಲಿಕೆ ನಮ್ಮೆಲ್ಲರಿಗೂ ಅಪಾರ ನೋವು ತಂದಿದೆ .
Saturday, 23 April 2016
Thursday, 21 April 2016
ಯಶಸ್ವಿಯಾಗಿ ಕಾರ್ಯಚಟುವಟಿಕೆ ಗಳ ಉದ್ಘಾಟನಾ ಕಾರ್ಯಕ್ರಮ
ಬೆಂಗಳೂರು ನಗರ ಜೆಲ್ಲೆ ಕನ್ನಡ ಸಾಹಿತ್ಯ ಪರಿಷತ್ ನ ೨೦೧೬-೨೦೧೯ ರ ಅವಧಿಯ ಕಾರ್ಯಚಟುವಟಿಕೆ ಗಳ ಉದ್ಘಾಟನಾ ಕಾರ್ಯಕ್ರಮ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಲವಾರು ಗಣ್ಯ ಮಾನ್ಯರ , ಕನ್ನಡ ಅಭಿಮಾನಿಗಳ , ಕಸಾಪ ಸದಸ್ಯರ , ಮಾಧ್ಯಮ ಮಿತ್ರರ , ಕನ್ನಡ ಸಂಘಟನೆ , ಚಳುವಳಿಗಾರರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು .
ಸಹಕರಿಸಿದ ಎಲ್ಲಾ ಸಹೃದಯರಿಗೆ ನಗರ ಜಿಲ್ಲೆ ಕಸಾಪ ವತಿಯಿಂದ ತುಂಬು ಹೃದಯದ ಕೃತಜ್ಞತೆಗಳು .
Sunday, 17 April 2016
2016-2019 ರ ಅವಧಿ ಯ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನ 2016-2019 ರ ಅವಧಿ ಯ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ದಿನಾಂಕ 21/04/2016 ರ ಸಂಜೆ 5 ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು , ಶ್ರೀ ಕೃಷ್ಣ ರಾಜಪರಿಷನ್ಮಂದಿರ ದಲ್ಲಿ .
ಎಲ್ಲಾ ಕನ್ನಡ ಅಭಿಮಾನಿಗಳು , ಆಜೀವ ಸದಸ್ಯರು , ಕನ್ನಡ ಹೋರಾಟಗಾರರು , ಸಾಹಿತಿಗಳು , ಕನ್ನಡ ಸಂಘ -ಸಂಸ್ಥೆ ಗಳ ಸದಸ್ಯರು , ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸವಿನಯ ಪ್ರಾರ್ಥನೆ .
Monday, 11 April 2016
ಸ್ವಾಗತ ಕನ್ನಡ ಕೈಂಕರ್ಯಕ್ಕಾಗಿ
ಆತ್ಮೀಯ ಕನ್ನಡ ಬಂಧುಗಳೇ ನಮಸ್ಕಾರ ,
ಕನ್ನಡ ಸಾಹಿತ್ಯ ಪರಿಷತ್ತು ಇತಿಹಾಸದಲ್ಲೇ ಪ್ರಥಮ ಬಾರಿಗೆ ಅನ್ನಬಹುದೇನೋ , ಎಂಬುವಂತೆ ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ವೆಬ್ ನ್ನು ಸೃಷ್ಟಿಸಿದೆ . ಈ ಅಧುನಿಕ ಜಗತ್ತಿನ ತಂತ್ರಜ್ಞಾನ , ಒತ್ತಡದ ಬದುಕಿನಲ್ಲಿ ಕನ್ನಡ ಕಟ್ಟುವಲ್ಲಿ , ಜನರನ್ನು ತಲುಪುವಲ್ಲಿ ಅಂತರ್ಜಾಲದ ಸಾಮಾಜಿಕ ಜಾಲ ತಾಣಗಳು ಅಥವಾ ಇನ್ಯಾವುದೇ ಮಾಧ್ಯಮಗಳು ಬಹಳ ಪರಿಣಾಮ ಕಾರಿಯಾಗಬಲ್ಲವು . ಹಾಗಾಗಿಯೇ ಈ ವೆಬ್ ನ್ನು ರಚಿಸಿದ್ದೇವೆ .
ಕನ್ನಡ ಬಂಧುಗಳು ತಮ್ಮ ಸಲಹೆ ಸೂಚನೆ ಗಳನ್ನು ನಮಗೆ ತಿಳಿಸಿ , ಮುಂದಿನ ದಿನಗಳಲ್ಲಿ ರಾಜಧಾನಿಯಲಿ ಕನ್ನಡ ಕಟ್ಟಲು ನಾವೆಲ್ಲಾ ಜೊತೆ ಗೂಡಿ ಕೆಲಸ ಮಾಡೋಣ .
ಮಿಂಚೆ ವಿಳಾಸ : kasapabnj@gmail.com
ವಾಟ್ಸ್ ಅಪ್ : ೯೩೪೧೩೯೮೯೨೭
ವೆಬ್ : http://kasapabnj.blogspot.in
ಸ್ಥಿರ ದೂರವಾಣಿ :೦೮೦-೨೬೬೦೩೦೯೯
ಜಂಗಮ ವಾಣಿ :೯೫೩೮೬೩೫೫೫೧
ಧನ್ಯವಾದಗಳು
ಮಾಯಣ್ಣ
ಅಧ್ಯಕ್ಷರು
ಬೆಂಗಳೂರು ನಗರ ಜಿಲ್ಲೆ ಕಸಾಪ
Saturday, 9 April 2016
Subscribe to:
Posts (Atom)