Friday, 29 July 2016

ಶ್ರೀ ದಯಾನಂದ ತಿಪ್ಪೇರುದ್ರಪ್ಪ ಅವರ ಅಭಿನಂದನಾ ಸಮಾರಂಭ



ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಹಾಗು ಪಶ್ಚಿಮ ವಲಯ ಸಂಚಾಲಕರಾಗಿ ನೂತನವಾಗಿ ನೇಮಕವಾಗಿರುವ ಶ್ರೀ ದಯಾನಂದ ತಿಪ್ಪೇರುದ್ರಪ್ಪ ಅವರ ಅಭಿನಂದನಾ ಸಮಾರಂಭ  ದಿನಾಂಕ ೦೨/೦೮/೨೦೧೬ ರ ಮಂಗಳವಾರ ಸಂಜೆ ೫ ಗಂಟೆಗೆ , ಕಾಲಾ ಗ್ರಾಮ ಸಮುಚ್ಛಯ , ಮಲ್ಲತ್ತಹಳ್ಳಿ . ಬೆಂಗಳೂರು ವಿಶ್ವವಿದ್ಯಾಲಯ  . ತಪ್ಪದೆ ಬನ್ನಿ . ಸರ್ವರಿಗೂ ಸ್ವಾಗತ . 

ಪರಿಷತ್ತು ನ ಮುಂದೆ ಪ್ರತಿಭಟನೆ

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನ ಸಾರಥ್ಯ ದಲ್ಲಿ ಮಹದಾಯಿ ಕೊಳದ ರೈತರಿಗಾಗುತ್ತಿರುವ ಅನ್ಯಾಯದ ವಿರುದ್ಧ  ಮಾಜಿ ಅಧ್ಯಕ್ಷರಾದ ಡಾ ಕೋ ವೇ ರಾಮಕೃಷ್ಣಗೌಡ , ಶ್ರೀ ಸಿ ಕೆ ರಾಮೇಗೌಡ , ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಟಿ ತಿಮ್ಮೇಶ್ , ರವರನ್ನು ಒಳಗೊಂಡಂತೆ , ಜಿಲ್ಲಾ ಅಧ್ಯಕ್ಷರಾದ ಶ್ರೀ ಮಾಯಣ್ಣ ಅವರ ಸಾರಥ್ಯದಲ್ಲಿ , ಕರ್ನಾಟಕ ಕೈಗಾರಿಕಾ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ತಿಮ್ಮಯ್ಯ , ಕಾರ್ಯಾಧ್ಯಕ್ಷ ಶ್ರೀ ಸಿದ್ದಯ್ಯ , ಕಾರ್ಯದರ್ಶಿ ಶ್ರೀ ನಾ ಶ್ರೀಧರ್ ಹಾಗು ಹಲವಾರು ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರು , ಕನ್ನಡ ಅಭಿಮಾನಿಗಳು ಪರಿಷತ್ತು ನ ಮುಂದೆ ಪ್ರತಿಭಟನೆ ನಡೆಸಿದರು . 













ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಬಂದ್ ಗೆ ಬೆಂಬಲಿಸಿ ದ್ವಿಚಕ್ರ ವಾಹನ ಜಾಥ



ಗೆ ,                                                                                    ದಿನಾಂಕ :೩೦/೦೭/೨೦೧೬
ಪತ್ರಿಕಾ ಸಂಪಾದಕರು 


* ಮನವಿ *
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಬಂದ್ ಗೆ ಬೆಂಬಲಿಸಿ ದ್ವಿಚಕ್ರ ವಾಹನ ಜಾಥ
*********
          ಮಹದಾಯಿ ನ್ಯಾಯಾಧಿಕರಣ ತೀರ್ಪಿನಿಂದ  ನಾಡಿಗೆ ಆಗಿರುವ ಅನ್ಯಾಯದ ವಿರುದ್ಧ ಕನ್ನಡಪರ ಸಂಘಟನೆಗಳ ಮುಖಂಡರಾದ ಶ್ರೀ ವಾಟಾಳ್ ನಾಗರಾಜ್ ಮತ್ತು ಸಾ ರಾ ಗೋವಿಂದು ಅವರ ನಾಯಕತ್ವದಲ್ಲಿ ಜುಲೈ ೩೦ ರಂದು ಕರ್ನಾಟಕ ಬಂದ್ ಗೆ ಕರೆ ನೀಡಿರುವ ಮೇರೆಗೆ ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ
ಬೆಂಗಳೂರು ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುನ ಪದಾಧಿಕಾರಿಗಳು ಹಾಗು ಎಲ್ಲ್ಲಾ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷರು , ಪದಾಧಿಕಾರಿಗಳು , ಹಾಗು ವಾರ್ಡ್ ಅಧ್ಯಕ್ಷರು ಪದಾಧಿಕಾರಿಗಳು , ಪಂಚಾಯತ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು  ಕ್ಷೇತ್ರದ ಮುಖ್ಯ ರಸ್ತೆಗಳಲ್ಲಿ ಬೆಳಿಗ್ಗೆಯೇ .೩೦ ರಿಂದ . ೧೫ ವರೆಗೆ ಪ್ರತಿಭಟಿಸಿ ನಂತರ ೧೦ ಘಂಟೆಗೆ ನಗರ ಜಿಲ್ಲಾ ಕಚೇರಿ ಮುಂಬಾಗಕ್ಕೆ ಬಂದು  ದ್ವಿಚಕ್ರ ವಾಹನಗಳಲ್ಲಿ ಪರಿಷತ್ತಿನಿಂದ   ಒಟ್ಟಾಗಿ ೫೦೦ ಜನ  , ಜಯ ಘೋಷಗಳೊಂದಿಗೆ   ದ್ವಿಚಕ್ರ ವಾಹನ ಜಾಥಾದೊಂದಿಗೆ  ಪುರಭವನಕ್ಕೆ ಹೋಗಿ , ಕನ್ನಡ ಹೋರಾಟಗಾರರಿಗೆ , ಮಹದಾಯಿ ಕೊಳದ ರೈತ ಪರಿವಾರಕ್ಕೆ ಬೆಂಬಲ ಸೂಚಿಸಲು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತೀರ್ಮಾನಿಸಿದೆ .  


ಅಧ್ಯಕ್ಷರು 


Thursday, 28 July 2016

ಕರ್ನಾಟಕ ಬಂದ್ ಗೆ ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಸಂಪೂರ್ಣ ಬೆಂಬಲ

     *   ಮನವಿ *

           ಮಹದಾಯಿ  ವಿಚಾರದಲ್ಲಿ ನಾಡಿಗೆ ಆಗಿರುವ ಅನ್ಯಾಯದ ವಿರುದ್ಧ ಕನ್ನಡಪರ  ಸಂಘಟನೆಗಳ ಮುಖಂಡರಾದ ಶ್ರೀ ವಾಟಾಳ್ ನಾಗರಾಜ್ ಮತ್ತು ಸಾ ರಾ ಗೋವಿಂದು ಅವರ ನಾಯಕತ್ವದಲ್ಲಿ  ಜುಲೈ ೩೦ ರಂದು ಕರ್ನಾಟಕ ಬಂದ್ ಗೆ ಕರೆ ನೀಡಿರುವ ಮೇರೆಗೆ   ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದೆ . 

                ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನ ಪದಾಧಿಕಾರಿಗಳು ಹಾಗು ಎಲ್ಲ್ಲಾ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷರು , ಪದಾಧಿಕಾರಿಗಳು , ಹಾಗು ವಾರ್ಡ್ ಅಧ್ಯಕ್ಷರು ಪದಾಧಿಕಾರಿಗಳು , ಪಂಚಾಯತ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನಿಮ್ಮ ನಿಮ್ಮ ಕ್ಷೇತ್ರದ ಮುಖ್ಯ ರಸ್ತೆಗಳಲ್ಲಿ ಬೆಳಿಗ್ಗೆಯೇ ೮.೩೦ ರಿಂದ ೯. ೧೫ ರ ವರೆಗೆ  ಪ್ರತಿಭಟಿಸಿ ನಂತರ ೧೦ ಘಂಟೆಗೆ ನಗರ ಜಿಲ್ಲಾ ಕಚೇರಿ ಮುಂಬಾಗಕ್ಕೆ ನಿಮ್ಮ ನಿಮ್ಮ ದ್ವಿಚಕ್ರ ವಾಹನಗಳಲ್ಲಿ ನಿಮ್ಮ ಕ್ಷೇತ್ರಗಳಿಂದ ಒಟ್ಟಾಗಿ ೫೦ ಜನ ಕಮ್ಮಿಯಾಗದಂತೆ , ಕನ್ನಡ ಶ್ಯಲ್ಯ ಧರಿಸಿಕೊಂಡು , ನಿಮ್ಮ ವಾಹನಕ್ಕೆ ಕನ್ನಡ ಭಾವುಟ ಹಾಕಿಕೊಂಡು ಜಯ ಘೋಷಗಳೊಂದಿಗೆ ಬಂದು , ತದನಂತರ ಪರಿಷತ್ತಿ ನಿಂದ ದ್ವಿಚಕ್ರ ವಾಹನ ಮೆರವಣಿಗೆ ಯೊಟ್ಟಿಗೆ ಪುರಭವನಕ್ಕೆ ಹೋಗಿ , ಕನ್ನಡ ಹೋರಾಟಗಾರರಿಗೆ , ಮಹದಾಯಿ ಕೊಳದ ರೈತ ಪರಿವಾರಕ್ಕೆ ಬೆಂಬಲ ಸೂಚಿಸುವುದು . 

ಏನಿದು ವಿವಾದ ?
(ಕೃಪೆ : ಏನ್ ಗುರು ಕಾಪಿ ಆಯ್ತಾ ಬ್ಲಾಗ್ 
http://enguru.blogspot.in/2009/12/kalasaa-bhamdura-enidu-vivaada.html)

ಕರ್ನಾಟಕ ರಾಜ್ಯದ ಹುಬ್ಬಳ್ಳಿ ಭಾಗದ ಕುಡಿಯುವ ನೀರಿನ ಯೋಜನೆಯಾದ ಕಳಸಾ-ಭಂಡೂರಾ ಯೋಜನೆ ಬಗ್ಗೆ ನೆರೆಯ ಗೋವಾ ರಾಜ್ಯ ಎತ್ತಿದ್ದ ತಕರಾರು, ಕೊನೆಗೆ ಕೇಂದ್ರಸರ್ಕಾರ ನ್ಯಾಯಾಧಿಕರಣವೊಂದನ್ನು ರಚಿಸಲು ಕಾರಣವಾಗಿದೆ. ಒಂದು ಸರಿಯಾದ ರಾಷ್ಟ್ರೀಯ ಜಲನೀತಿಯಿಲ್ಲದೆ ಇಂಥಾ ಟ್ರಿಬ್ಯೂನಲ್‍ಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂಬುದು ಪ್ರಶ್ನಾರ್ಹವಾಗಿದೆ. ಕನ್ನಡಿಗರ ಪಾಲಿಗಂತೂ ಟ್ರಿಬ್ಯೂನಲ್‍ಗಳೆಂದರೇನೇ ದುಸ್ವಪ್ನದ ಹಾಗೆ, ನಮ್ಮಿಂದ ನಮ್ಮ ಪಾಲನ್ನು ಕಿತ್ತುಕೊಳ್ಳಲೆಂದೇ ಇರುವ ಹಾಗೆ, ನಮ್ಮ ಯೋಜನೆಗಳನ್ನು ತಡೆದು ವಿಳಂಬ ಮಾಡಿಸುವ ಒಂದು ತಂತ್ರದ ಹಾಗೆ ಕಾಣ್ತಾಯಿದೆ ಅನ್ನುವ ಅನುಮಾನಕ್ಕೆ ಕಾರಣವಾಗಿದೆ. ಏನಿದು ಮಹದಾಯಿ ಯೋಜನೆ? ಏನು ಈ ವಿವಾದ? ಎಂಬುದನ್ನು ಸ್ವಲ್ಪ ನೋಡೋಣ ಬಾ ಗುರು!

ಮಹದಾಯಿ ಹುಟ್ಟು ಮತ್ತು ಹರಿವು
ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರದಿಂದ 18 ಕಿ.ಮೀ ದೂರದ ಪಶ್ಚಿಮ ಘಟ್ಟ ಸಾಲಿನ ಜಂಬೋತಿ ಎನ್ನುವಲ್ಲಿ ಹುಟ್ಟುವ ಮಹದಾಯಿ ನದಿ ಕರ್ನಾಟಕದಲ್ಲಿ 28.8 ಕಿ.ಮೀ ದೂರ ಹರಿದು ನೆರೆಯ ಗೋವಾ ರಾಜ್ಯವನ್ನು ಪ್ರವೇಶಿಸುತ್ತದೆ. ಗೋವಾದಲ್ಲಿ ಮಾಂಡೋವಿ ಎಂಬ ಹೆಸರಿಂದ ಕರೆಯಲಾಗುವ ಈ ನದಿಯು ಅಲ್ಲಿ 52 ಕಿ.ಮೀ ದೂರ ಸಾಗಿ ಅರಬ್ಬಿ ಸಮುದ್ರ ಸೇರುತ್ತದೆ. ಇದರ ನದಿ ಪಾತ್ರದ ಹರವು ಒಟ್ಟು 2032 ಚದರ ಕಿ.ಮೀ ಆಗಿದ್ದು ಕರ್ನಾಟಕದಲ್ಲಿ ಇದು 452 ಚ.ಕಿ.ಮೀ ಇದೆ. ಈ ನದಿಯಲ್ಲಿ ವರ್ಷವೊಂದಕ್ಕೆ ಸರಾಸರಿ 210 ಟಿ.ಎಂ.ಸಿ ನೀರು ಸಿಗುತ್ತದೆ. ಇದರಲ್ಲಿ ಕರ್ನಾಟಕದ ಪಾಲು 45 ಟಿ.ಎಂ.ಸಿಯಾಗಿದೆ. ಈ ನದಿ ಪಶ್ಚಿಮ ದಿಕ್ಕಿಗೆ ಹರಿಯುತ್ತದೆ. ಇದಕ್ಕೆ ಅತಿ ಸಮೀಪದಲ್ಲೆ ಪೂರ್ವ ದಿಕ್ಕಿಗೆ ಹರಿಯುವ ಕನ್ನಡ ನಾಡಿನ, ವಿಶೇಷವಾಗಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆಸರೆಯಾಗಿರುವ ಮಲಪ್ರಭ ನದಿ ಹುಟ್ಟುತ್ತದೆ. ಇದು ಕಳಸಾ ಭಂಡೂರದಿಂದ 4 ಕಿ.ಮೀ ದೂರದಲ್ಲಿದೆ. ಹುಬ್ಬಳ್ಳಿ ಧಾರವಾಡ ಗದಗಗಳಂತಹ ಜನವಸತಿ ಪ್ರದೇಶಗಳಲ್ಲಿ ಹತ್ತು ಹದಿನೈದು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡುವ ಶೋಚನೀಯ ಸ್ಥಿತಿಯಿದೆ. ನಗರೀಕರಣದಿಂದ ಈ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಬೇಡಿಕೆಯನ್ನು ಪೂರೈಸಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವು ಒಂದು ಮಹತ್ವದ ಯೋಜನೆಯನ್ನು ಆರಂಭಿಸಿತು.

ಕಳಸಾ-ಭಂಡೂರಾ ನಾಲೆ ಯೋಜನೆ ಮತ್ತು ವಿವಾದ

1980ರ ಸುಮಾರಿನಲ್ಲಿ ನರಗುಂದ ರೈತ ಬಂಡಾಯದ ತರುವಾಯ ಅಂದಿನ ಮುಖ್ಯಮಂತ್ರಿ ಶ್ರೀ ಗುಂಡೂರಾವ್‍ರವರು ನೇಮಿಸಿದ್ದ ಬೊಮ್ಮಾಯಿ ಆಯೋಗ ಯೋಜನೆಯೊಂದನ್ನು ಜಾರಿಮಾಡಲು ಸಲಹೆ ನೀಡಿತು. ಮಹದಾಯಿ ನದಿಗೆ ಮತ್ತು ಅದರ ತೊರೆಗಳಿಗೆ ಹಲವಾರು ಕಡೆ ಅಣೆಕಟ್ಟೆಗಳನ್ನು ಕಟ್ಟಿ ನಾಲೆಗಳ ಮೂಲಕ ಮಲಪ್ರಭೆಗೆ 7.56 ಟಿ.ಎಂ.ಸಿಯಷ್ಟು ನೀರನ್ನು ಸರಬರಾಜು ಮಾಡುವುದೇ ಆ ಯೋಜನೆ. ಪಶ್ಚಿಮಕ್ಕೆ ಹರಿಯುತ್ತಿರುವ ಮಹದಾಯಿಯಿಂದ ಸ್ವಲ್ಪ ಮಟ್ಟಿನ ನೀರನ್ನು ಪೂರ್ವಕ್ಕೆ ಹರಿಸಿ ಮಲಪ್ರಭೆಗೆ ಪೂರೈಸುವುದೇ ಇದರ ಮೂಲ ಉದ್ದೇಶ. ಇದಕ್ಕಾಗೆ ಕಳಸ ಮತ್ತು ಭಂಡೂರ ಎಂಬ ಎರಡು ಕಡೆ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿದೆ. ಸುರ್ಲಾ ನಾಲೆ, ಸಿಂಗಾರ್ ನಾಲೆ, ನೆರ್ಸೆ ನಾಲೆ, ಕಳಸ ನಾಲೆ, ಭಂಡೂರ ನಾಲೆ, ಹಲ್ತಾರ್ ನಾಲೆಗಳು ಈ ಯೋಜನೆಯ ಅಡಿಯಲ್ಲಿ ಬರಲಿವೆ. ಇದಕ್ಕಾಗಿ ಕರ್ನಾಟಕ ಸರ್ಕಾರ 2002ರಲ್ಲಿ ಕೇಂದ್ರದ ಮಂಜೂರಾತಿಯನ್ನು ಪಡೆದು ಕೆಲಸ ಕೈಗೆತ್ತಿಕೊಂಡಿತು. ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಆರ್.ಬೊಮ್ಮಾಯಿಯವರ ಕಾಲದಲ್ಲಿ (1989) ಗೋವಾದ ಮುಖ್ಯಮಂತ್ರಿಗಳಾಗಿದ್ದ ಪ್ರತಾಪ್ ಸಿಂಗ್ ರಾಣೆಯವರ ಜೊತೆ ಮಾತುಕತೆ ನಡೆದಿದ್ದು ರಾಣೆಯವರು 45 ಟಿ.ಎಂ.ಸಿ ನೀರು ಬಳಸಲು ನಮ್ಮ ಅಡ್ಡಿಯೇನಿಲ್ಲ ಎಂದು ನುಡಿದಿದ್ದರು. ಆದರೆ ನಂತರ ಅಲ್ಲಿ ಅಧಿಕಾರಕ್ಕೆ ಬಂದ ಮನೋಹರ್ ಪರಿಕ್ಕರ್ ನೇತೃತ್ವದ ಬಿ.ಜೆ.ಪಿ ಸರ್ಕಾರ ಈ ಯೋಜನೆಗೆ ಕೊಂಕು ಎತ್ತಿತು. ಆಗ ರಾಜ್ಯದಲ್ಲಿ ಕಾಂಗ್ರೆಸ್‌ನ ಎಸ್.ಎಂ.ಕೃಷ್ಣಾ ಮುಖ್ಯಮಂತ್ರಿಗಳಾಗಿದ್ದರು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಗೋವಾದ ಒತ್ತಡಕ್ಕೆ ಮಣಿದು ಆಗಲೆ ನೀಡಲಾಗಿದ್ದ ಒಪ್ಪಿಗೆಯನ್ನು ಹಿಂಪಡೆಯಿತು. ಆಗ ರಾಜ್ಯ ಸರ್ಕಾರ ತನ್ನದೆ ಹಣವನ್ನು ಹೂಡಿ ಈ ಯೋಜನೆಯನ್ನು ಮುಂದುವರೆಸಲು ನಿರ್ಧರಿಸಿತು ಮತ್ತು ರಾಷ್ಟ್ರೀಯ ಜಲ ಆಯೋಗ ಮತ್ತು ರಾಷ್ಟ್ರೀಯ ಪರಿಸರ ವಿಜ್ಞಾನ ಸಂಶೋಧನಾ ಸಂಸ್ಥೆ (ನ್ಯಾಷನಲ್ ಎನ್‌ವಿರಾನ್‌ಮೆಂಟಲ್ ಇಂಜಿನಿಯರಿಂಗ್ ರೀಸರ್ಚ್ ಇನ್‌ಸ್ಟಿಟ್ಯೂಟ್) ಗಳಿಂದ ಅನುಮತಿ ಪಡೆದಿರುವುದರಿಂದ ನೀರು ಹರಿಸಿಕೊಳ್ಳುತ್ತೇವೆ ಎನ್ನುವ ನಿಲುವು ತಾಳಿತು.

ಯೋಜನೆಗೆ ವಿರೋಧ ಮಾಡುತ್ತಿರುವ ಗೋವಾಈ ಸಂಬಂಧ ದಿನಾಂಕ 22.09.2006ರಂದು ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಮುಖ್ಯಮಂತ್ರಿಗಳಾದ ಕುಮಾರ ಸ್ವಾಮಿಯವರು ಭೂಮಿ ಪೂಜೆ ನೆರವೇರಿಸಿದರು. ಇದರಿಂದ ಕನಲಿದ ಗೋವಾ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ 15.11.2006ರಲ್ಲಿ ದೂರು ಸಲ್ಲಿಸಿ ಕರ್ನಾಟಕದ ಯೋಜನೆಗೆ ತಡೆ ಆದೇಶ ನೀಡಬೇಕೆಂದೂ, ಯೋಜನೆಯನ್ನು ರದ್ದು ಮಾಡಬೇಕೆಂದೂ ಕೋರಿತು. ಸರ್ವೋಚ್ಛ ನ್ಯಾಯಾಲಯವು ದಿನಾಂಕ 27.11.2006ರಂದು ಕರ್ನಾಟಕದ ಕಾಮಗಾರಿಗೆ ತಡೆ ನೀಡಲು ನಿರಾಕರಿಸಿತು.

ಈ ವೇಳೆಗೆ ಮಹದಾಯಿ ಬಚಾವೋ ಅಭಿಯಾನದ ಹೆಸರಲ್ಲಿ ಗೋವಾದಲ್ಲಿ ಕರ್ನಾಟಕದ ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸಿ ಹೋರಾಟ ಆರಂಭವಾಯ್ತು. ಗೋವಾ ರಾಜ್ಯ ಈ ಯೋಜನೆಯಿಂದ ತನ್ನ ರಾಜ್ಯದ ಅರಣ್ಯ ಮತ್ತು ಜೀವಸಂಕುಲಕ್ಕೆ ಹಾನಿಯಾಗುತ್ತದೆ ಎನ್ನುವ ವಾದ ಮುಂದಿಟ್ಟಿತು. ನದಿಗೆ ತಿರುವು ನೀಡುವುದರಿಂದ ಗೋವಾದ ಜೀವನದಿಯಾದ ಮಾಂಡೊವಿ ಬತ್ತಿಹೋಗಲಿದೆ ಎಂಬ ವಾದ ಮುಂದಿಟ್ಟು ಅಲ್ಲಿನ ಜನರಲ್ಲಿ ಆಂದೋಲನವುಂಟು ಮಾಡುತ್ತಿದ್ದಾರೆ. ವಾಸ್ತವವಾಗಿ 210 ಟಿ.ಎಂ.ಸಿ ಪ್ರಮಾಣದ ನೀರು ದೊರೆಯುವ ನದಿ ಮಾಂಡೋವಿಯಲ್ಲಿ ದೊರೆಯುವ 21೦ ಟಿ.ಎಂ.ಸಿಯಲ್ಲಿ 7.56 ಟಿ.ಎಂ.ಸಿ ನೀರನ್ನು ತಿರುಗಿಸಿದರೆ ನದಿ ಬತ್ತಿಹೋಗುವುದೇ? 4 ಕಿ.ಮೀ ದೂರ ನಾಲೆ ತೋಡಿದರೆ ಅರಣ್ಯ ಸಂಪತ್ತು, ಅಲ್ಲಿನ ಜೀವಸಂಕುಲ ನಾಶವಾಗುವುದೆ? ಗೋವಾಕ್ಕೆ ಪರಿಸರದ ಬಗ್ಗೆ ಕಾಳಜಿಯಿದ್ದಲ್ಲಿ ಅದೇ ಮಾಂಡೋವಿಯ ದಂಡೆಯಲ್ಲಿ ಎರಡೆರಡು ವಿದ್ಯುತ್ ಉತ್ಪದನಾ ಘಟಕಗಳನ್ನು ಯಾಕೆ ತೆರೆಯುವ ಯೋಜನೆ ಹೊಂದಿದೆ?
ಸದ್ಯಕ್ಕೆ ಸುಪ್ರಿಂಕೋರ್ಟಿನಲ್ಲಿ ಮಹದಾಯಿ ಯೋಜನೆ ಕುರಿತು ಪ್ರಕರಣದ ವಿಚಾರಣೆ ನಡೆಯುತ್ತಿದೆ. ತೀರ್ಪು ಹೊರಬರುವ ಮುನ್ನವೇ ಈಗ ಮತ್ತೆ ಗೋವಾ ಲಾಬಿಗೆ ಮಣಿದಿರುವ ಕೇಂದ್ರ ಸರಕಾರ ನ್ಯಾಯಾಧೀಕರಣ ರಚಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಮಹದಾಯಿ ನದಿಯ ನಮ್ಮ ಪಾಲಿನ 45 ಟಿಎಂಸಿ ನೀರಿನಲ್ಲಿ 7.56 ಟಿಎಂಸಿ ತೆಗೆದುಕೊಳ್ಳಲು ಇನ್ನೂ ಹತ್ತು ಹದಿನೈದು ವರುಷಗಳು ಕಾಯಬೇಕೆ? ಒಟ್ಟಿನಲ್ಲಿ ಇದು ಹುಬ್ಬಳ್ಳಿ ಗದಗುಗಳ ಕುಡಿಯುವ ನೀರಿನ ಬವಣೆಯನ್ನು ಇನ್ನೂ ಹೆಚ್ಚು ಮಾಡುತ್ತದೆ ಅಲ್ವಾ ಗುರೂ?

Wednesday, 27 July 2016

ಯಲಹಂಕ ವಿಧಾನಸಭಾ ಕ್ಷೇತ್ರದ ಕಸಾಪ ಕಾರ್ಯಚಟುವಟಿಕೆಗಳ ಉದ್ಘಾಟನೆ

ಯಲಹಂಕ ವಿಧಾನಸಭಾ ಕ್ಷೇತ್ರದ ಕಸಾಪ ಕಾರ್ಯಚಟುವಟಿಕೆಗಳ ಉದ್ಘಾಟನೆ , ಪ್ರತಿಭಾ ಪುರಸ್ಕಾರ ಕಾರ್ಯಕ್ರಮ . 
ದಯಮಾಡಿ ಬನ್ನಿ 


ಆನೇಕಲ್ ವಿಧಾನಸಭಾ ಕ್ಷೇತ್ರ ಕಸಾಪ ವತಿಯಿಂದ ಕವಿಗೋಷ್ಠಿ ಕಾರ್ಯಕ್ರಮ

ಆನೇಕಲ್ ವಿಧಾನಸಭಾ ಕ್ಷೇತ್ರ ಕಸಾಪ ವತಿಯಿಂದ ಕವಿಗೋಷ್ಠಿ ಕಾರ್ಯಕ್ರಮ , ತಮ್ಮೆಲ್ಲರಿಗೂ ಹೃದಯಪೂರ್ವಕ ಆಹ್ವಾನ 


ಮಹದೇವಪುರ ವಿಧಾನಸಭಾ ಕ್ಷೇತ್ರ ಕಸಾಪ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಮಹದೇವಪುರ ವಿಧಾನಸಭಾ ಕ್ಷೇತ್ರ ಕಸಾಪ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭ , ಪುಸ್ತಕ ಬಿಡುಗಡೆ ಹಾಗು ಪ್ರತಿಭಾ ಪುರಸ್ಕಾರ ಸಮಾರಂಭ , ದಿನಾಂಕ ೩೦/೦೭/ ೨೦೧೬ ಸಂಜೆ ೪ ಕ್ಕೆ . ಸ್ಥಳ : ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣ , ವರ್ತೂರ್ . 

"ಕನ್ನಡ ಕಟ್ಟುವ ಮನಸುಗಳಿಗೆ ಆದರದ ಸ್ವಾಗತ "



ಭಾವಚಿತ್ರಗಳು

ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರು 
ಶ್ರೀ ಮಾಯಣ್ಣ ಅವರು 





ಗೌರವ ಕಾರ್ಯದರ್ಶಿಗಳು ಶ್ರೀ ಡಾ . ಎಸ ಎಸ ಮಂಜುನಾಥ್ , ಶ್ರೀ ಎಚ್ ಕೆ ಸುರೇಶ ಹಾಗು ಗೌರವ ಕೋಶಾಧ್ಯಕ್ಷ ರಾದ ಶ್ರೀ ಟಿ ಸುಂದರ್ ರಾಜ್ ರವರು . 



" ಸಾಹಿತ್ಯ ಪರಿಷತ್ತು ನ ಅಂಗಳದಲ್ಲಿ ಸಂಗೀತ ಸೌರಭ "

ಅಂಗಳದಲ್ಲಿ ಕನ್ನಡ ಗೀತೆಗಳ ಸಂಗೀತ ಸುಧೆಯನ್ನು ಉಣಬಡಿಸುವ ವಿನೂತನ ಕಾರ್ಯಕ್ರಮ " ಸಾಹಿತ್ಯ ಪರಿಷತ್ತು ನ ಅಂಗಳದಲ್ಲಿ ಸಂಗೀತ ಸೌರಭ ". 

ಪ್ರತಿ ಎರಡೆನೆ ಶನಿವಾರ ಸಂಜೆ ೫.೩೦ ಕ್ಕೆ ಈ ಕಾರ್ಯಕ್ರಮವನ್ನು ಸಾಹಿತ್ಯ ಪರಿಷತ್ತು ಅಂಗಳದಲ್ಲಿ ನಡೆಸಲಾಗುತ್ತಿದೆ . ತದನನಂತರ ರಾಜಧಾನಿಯ ಇತರ ಪ್ರದೇಶಗಳಿಗೂ ವಿಸ್ತರಿಸಲಾಗುವುದು. ಎಲ್ಲೆಲ್ಲೂ ಕನ್ನಡ ಝೇಂಕರಿಸಬೇಕು ಅನ್ನುವುದಷ್ಟೇ ನಮ್ಮ ಆಶಯ . 

ದಯಮಾಡಿ ಬನ್ನಿ . 




ಶ್ರೀ ತುಳಸೀದಾಸರ ೧೯೯ ನೇ ಜಯಂತಿ ಹಾಗು "ಗುರು ತುಳಸಿರಾಮ " ಪುಸ್ತಕ ಬಿಡುಗಡೆ ಕಾರ್ಯಕ್ರಮ

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು " ರಾಜಧಾನಿಯಲ್ಲಿ ಕಣ್ಣಿಗೆ ಕಾಣಲಿ ಕನ್ನಡ , ಕಿವಿಗೆ ಕೇಳಲಿ ಕನ್ನಡ " ಎಂಬ ಆಶಯದೊಂದಿಗೆ ವಿನೂತನವಾದ ಕನ್ನಡ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ . ಮಹಾನ್ ಚೇತನಗಳ ಜಯಂತಿ ,  ಅವರ ಸ್ಮರಣೆಯ ಕಾರ್ಯಕ್ರಮಗಳು ಕೂಡ ಅದರಲ್ಲಿ ಒಂದು . 

ಈ ಹಾದಿಯಲ್ಲಿ ಇದೆ ಜುಲೈ ತಿಂಗಳು ೩೦ ನೇ ತಾರೀಖು  ಶನಿವಾರ ಬೆಂಗಳೂರಿನ ದಂಡು ಪ್ರದೇಶದ ಶ್ರೀ ತುಳಸೀದಾಸರ ಮಠ  ದಲ್ಲಿ ಶ್ರೀ ತುಳಸೀದಾಸರ ೧೯೯ ನೇ ಜಯಂತಿ ಹಾಗು "ಗುರು ತುಳಸಿರಾಮ " ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ದಾಸ ಸಾಹಿತ್ಯ ಪರಿಷತ್ತು ಸಹಯೋಗ ದೊಂದಿಗೆ ಹಮ್ಮಿಕೊಳ್ಳಲಾಗಿದೆ . ದಯಮಾಡಿ ಬನ್ನಿ . 



Friday, 22 July 2016

ಈಜೀಪುರ ವಾರ್ಡ್ ಅಧ್ಯಕ್ಷರ ಹೊಣೆಗಾರಿಕೆ ಸ್ವೀಕಾರ ಸಮಾರಂಭ

ಈಜೀಪುರ ವಾರ್ಡ್ ಅಧ್ಯಕ್ಷರ ಹೊಣೆಗಾರಿಕೆ ಸ್ವೀಕಾರ ಸಮಾರಂಭ

ದೂರವಾಣಿ ಸಂಖ್ಯೆಗಳು


ಬೆಂಗಳೂರು ನಗರ ಜಿಲ್ಲೆ ಪದಾಧಿಕಾರಿಗಳು ಹಾಗು ವಿಧಾನ ಸಭಾ ಘಟಟಕಗಳ ಅಧ್ಯಕ್ಷರ ದೂರವಾಣಿ ಸಂಖ್ಯೆಗಳು 






Thursday, 21 July 2016

ಬಸವೇಶ್ವರ ವಾರ್ಡ್ ಘಟಕ

ರಾಜಾಜಿನಗರ ವಿಧಾನಸಭಾ ಕ್ಷೇತ್ರ ದಲ್ಲಿ ಯಶಸ್ವಿಯಾಗಿ ನಡೆದ  ಬಸವೇಶ್ವರ ವಾರ್ಡ್ ಘಟಕದ ಪದಾಧಿಕಾರಿಗಳ ಹೊಣೆಗಾರಿಕೆ ವರ್ಗಾವಣೆ ಮತ್ತು ಕನ್ನಡ ಚಳುವಳಿ ಒಂದು ಚಿಂತನೆ ಉಪನ್ಯಾಸ ಕಾರ್ಯಕ್ರಮ. 








Monday, 11 July 2016

ಸಂಗೀತ ಸೌರಭ ಮೂರನೆಯ ಆವೃತ್ತಿ

ನಮಸ್ಕಾರ , 
ಸಂಗೀತ ಸೌರಭ ಮೂರನೆಯ ಆವೃತ್ತಿಯನ್ನು ಯಶಸ್ವಿಯಾಗಿ ಮುಗಿಸಿದೆ. ಭಾಗವಹಿಸಿದ ಎಲ್ಲಾ ಸಹೃದಯರಿಗೂ ಅನಂತ ಅನಂತ ಧನ್ಯವಾದಗಳು. ರಾಜಧಾನಿಯ ಮೂಲೆ ಮೂಲೆಯಲ್ಲೂ ಕನ್ನಡ ಗೀತೆಗಳು ಗುನುಗಿಸಿಕೊಳ್ಳಬೇಕು. ಆ ಮೂಲಕ ಕನ್ನಡದ ಬಗೆಗೆ ಅಭಿಮಾನ ಮೂಡಿಸುವ ಪ್ರಯತ್ನ ನಮ್ಮದು. ಈ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ನಮ್ಮದು. ನಿಮ್ಮ ಸಲಹೆಗಳು ನಮ್ಮನ್ನು ಮತ್ತಸ್ಟು ಕನ್ನಡಮುಖಿ ಕೆಲಸ ಕೈಗೊಳ್ಳುವಂತೆ ಪ್ರೇರೆಪಿಸಲಿ. ನಿಮ್ಮ ಸಹಕಾರವಿರಲಿ. 

ನಿಮ್ಮ ಮಾಯಣ್ಣ
ವಾಟ್ಸಪ್ ೯೯೬೪೪೩೮೩೯೩
ಮಿಂಚೆ:kasapabnj@gmail.com
ವೆಬ್:http://kasapabnj.blogspot.in





Thursday, 7 July 2016

೦೯/೦೭/೨೦೧೬

ದಿನಾಂಕ ೦೯/೦೭/೨೦೧೬ ರಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಂದ ಕೆ.ರಾಮಯ್ಯ ದತ್ತಿ ಕಾರ್ಯಕ್ರಮ ಹಾಗು ಅಂಗಳದಲ್ಲಿ ಸಂಗೀತ ಸೌರಭ ಹಾಗು ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಿಂಗಳ ಅತಿಥಿಯಾಗಿ ಡಾ.ಬಾನಂದೂರು ಕೆಂಪಯ್ಯ ಅವರು ಭಾಗವಹಿಸಲಿದ್ದಾರೆ. ಸ್ಥಳ ಸಾಹಿತ್ಯ ಪರಿಷತ್ತಿನ ಆವರಣ. ತಮ್ಮೆಲ್ಲರಿಗೂ ಸ್ವಾಗತ.
http://kasapabnj.blogspot.in



Wednesday, 6 July 2016

ಮಾಹಿತಿ ಗಾಗಿ ಮನವಿ



ನಲ್ಮೆಯ ವಿಧಾನಸಭಾ ಕ್ಷೇತ್ರ ಕಸಾಪದ ಅಧ್ಯಕ್ಷರೇ ಹಾಗು ವಲಯ  ಸಂಯೋಜಕರೇ ದಯಮಾಡಿ ಈ ಕೆಳಗೆ ನೀಡಿರುವ ಮಾದರಿಯಂತೆ ನಿಮ್ಮ ಘಟಕಗಳ ಪದಾಧಿಕಾರಿಗಳ ಪಟ್ಟಿ ಹಾಗು ಪ್ರತಿ ವಾರ್ಡ್ ಮಟ್ಟದಲ್ಲಿ ಹೀಗೆ ತಯಾರಿಸಿ ನೀಡಬೇಕಾಗಿ ಕೇಳಿಕೊಳ್ಳುತ್ತೇನೆ. ಇದನ್ನು ನಮ್ಮ ಮಿಂಚೆ ವಿಳಾಸಕ್ಕೆ kaspabnj@gmail.com ಕಳುಹಿಸಿ, ಮಾಹಿತಿ ಸಂಚಾಲಕರಾದ ಶ್ರೀ ಲಿಂಗೇಶ್ ಹುಣಸೂರ್ ಅವರಿಗೆ ಮಾಹಿತಿ ರವಾನಿಸಿ.

ಮಾಯಣ್ಣ
ಅಧ್ಯಕ್ಷರು
PÀæ.¸ÀA
¥ÀzÀ£ÁªÀÄ
ºÉ¸ÀgÀÄ
«¼Á¸À
£À°AiÀÄİ
«ÄAZÉ
PÀ.¸Á.¥À ¸ÀzÀ¸ÀåvÀézÀ ¸ÀASÉå
d£Àä ¢£ÁAPÀ
gÀPÀÛzÀ UÀÄA¥ÀÄ
01
CzsÀåPÀëgÀÄ







02
UËgÀªÀ PÁAiÀÄðzÀ²ð







03
UËgÀªÀ PÁAiÀÄðzÀ²ð







04
ReÁAa












































 «zsÁ£À¸À¨sÁPÉëÃvÀæ PÀ¸Á¥À ¥ÀzÁ¢üPÁjUÀ¼À ªÀiÁ»w ¥ÀnÖ