ಗೆ , ದಿನಾಂಕ :೩೦/೦೭/೨೦೧೬
ಪತ್ರಿಕಾ ಸಂಪಾದಕರು
* ಮನವಿ *
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಬಂದ್ ಗೆ ಬೆಂಬಲಿಸಿ ದ್ವಿಚಕ್ರ ವಾಹನ ಜಾಥ
*********
ಮಹದಾಯಿ ನ್ಯಾಯಾಧಿಕರಣ ತೀರ್ಪಿನಿಂದ ನಾಡಿಗೆ ಆಗಿರುವ ಅನ್ಯಾಯದ ವಿರುದ್ಧ ಕನ್ನಡಪರ ಸಂಘಟನೆಗಳ ಮುಖಂಡರಾದ ಶ್ರೀ ವಾಟಾಳ್ ನಾಗರಾಜ್ ಮತ್ತು ಸಾ ರಾ ಗೋವಿಂದು ಅವರ ನಾಯಕತ್ವದಲ್ಲಿ ಜುಲೈ ೩೦ ರಂದು ಕರ್ನಾಟಕ ಬಂದ್ ಗೆ ಕರೆ ನೀಡಿರುವ ಮೇರೆಗೆ ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಬೆಂಗಳೂರು ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುನ ಪದಾಧಿಕಾರಿಗಳು ಹಾಗು ಎಲ್ಲ್ಲಾ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷರು , ಪದಾಧಿಕಾರಿಗಳು , ಹಾಗು ವಾರ್ಡ್ ಅಧ್ಯಕ್ಷರು ಪದಾಧಿಕಾರಿಗಳು , ಪಂಚಾಯತ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕ್ಷೇತ್ರದ ಮುಖ್ಯ ರಸ್ತೆಗಳಲ್ಲಿ ಬೆಳಿಗ್ಗೆಯೇ ೮.೩೦ ರಿಂದ ೯. ೧೫ ರ ವರೆಗೆ ಪ್ರತಿಭಟಿಸಿ ನಂತರ ೧೦ ಘಂಟೆಗೆ ನಗರ ಜಿಲ್ಲಾ ಕಚೇರಿ ಮುಂಬಾಗಕ್ಕೆ ಬಂದು ದ್ವಿಚಕ್ರ ವಾಹನಗಳಲ್ಲಿ ಪರಿಷತ್ತಿನಿಂದ ಒಟ್ಟಾಗಿ ೫೦೦ ಜನ , ಜಯ ಘೋಷಗಳೊಂದಿಗೆ ದ್ವಿಚಕ್ರ ವಾಹನ ಜಾಥಾದೊಂದಿಗೆ ಪುರಭವನಕ್ಕೆ ಹೋಗಿ , ಕನ್ನಡ ಹೋರಾಟಗಾರರಿಗೆ , ಮಹದಾಯಿ ಕೊಳದ ರೈತ ಪರಿವಾರಕ್ಕೆ ಬೆಂಬಲ ಸೂಚಿಸಲು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತೀರ್ಮಾನಿಸಿದೆ .
ಅಧ್ಯಕ್ಷರು
No comments:
Post a Comment